K2kannadanews.in
Theft in Raichur : ಕಳ್ಳರು (Thieves) ತಮ್ಮ ಕೈಚಳಕ ತೋರಿಸಿದ್ದು ಎರಡು ಮನೆ (2 house theft) ಕಳ್ಳತನ ಮಾಡಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕಚೇರಿ (NH office) ಕಳ್ಳತನಕ್ಕೆ ಯತ್ನಿಸಿದ ಘಟನೆ ಜರುಗಿದೆ.
ರಾಯಚೂರು (Raichur) ನಗರದ ಕೃಷ್ಣದೇವರಾಯ ಬಡಾವಣೆಯಲ್ಲಿ ಬರುವ, ಸುಚಿತ್ರ ಕಾಲೋನಿ (Colony) ಮತ್ತು ಆಶಿರ್ವಾದ್ ಕಾಲೋನಿಯಲ್ಲಿ ಕಳ್ಳತನ ಮಾಡಲಾಗಿದೆ. ಎರಡು ಮನೆಯಲ್ಲಿ ಓಡವೆ (Jewelry) ಮತ್ತು ನಗದು (Money) ಕದ್ದು ಪರಾರಿಯಾಗಿದ್ದಾರೆ. ಶ್ರಾವಣ ಮಾಸದ ಹಿನ್ನಲೆ ದೇವರ (Good) ದರ್ಶನಕ್ಕೆ ಹೋದ ವೇಳೆ ಘಟನೆ ಜರುಗಿದೆ. ಮನೆಯಲ್ಲಿ ಯಾರು ಇಲ್ಲದ್ದು ಗಮನಿಸಿ ಕಳ್ಳರು, ಬಾಗಿಲು (Door) ಮುರಿದು (Broken) ಒಂದು ಮನೆಯಲ್ಲಿ 2 ತೊಲೆ ಬಂಗಾರ (Gold) ಮತ್ತು 25 ಸಾವಿರ ನಗದು, ಇನ್ನೊಂದು ಮನೆಯಲ್ಲಿ 4 ತೊಲೆ ಬಂಗಾರ, 50 ಸಾವಿರ ನಗದು ಕಳ್ಳತನ ಮಾಡಿದ್ದಾರೆ.
https://youtu.be/Mj4D1ob5624?si=_v_Q_oKywHn8wyqW
ಘಟನೆಯೂ ಎರಡು ದಿನಗಳ ಹಿಂದೆಯೇ ನಡೆದಿದೆ ಎನ್ನಲಾಗುತ್ತಿದೆ. ಕಾರಣ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಲ್ಲೂ ಕಳ್ಳರು ಕಚೇರಿ ಬಾಗಿಲು ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ. ಎರಡನೇ ಶನಿವಾರ (Saturday) ಮತ್ತು ಭಾನುವಾರ (Sunday) ಇರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಸಿಬ್ಬಂದಿಗಳು (Staff) ಕಚೇರಿಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನೇತಾಜಿ ಪೊಲೀಸ್ (Police) ಠಾಣೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನು ಎರಡು ಮನೆಯವರು ಮಾಲಿಕರು ದೂರು ದಾಖಲಾಗಿದ್ದರೆ.
https://youtu.be/0o1jVFjX6tU?si=-BaZ58Zp-1pXOxkF