K2kannadanews.in
Accident News ರಾಯಚೂರು : ರಸ್ತೆ ಬದಿ ಹೋಗುತ್ತಿದ್ದ ಎತ್ತಿನ ಬಂಡಿಗೆ ಹಿಂಬದಿಯಿಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಎತ್ತುಗಳು ಸೇರಿ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಅಂಕುಷದೊಡ್ಡಿ ಗ್ರಾಮದ ಬಳಿ ನಡೆದಿದೆ.
https://youtu.be/OyOBVHrVDyM?si=bcBSsZcCUQN3jhz7
ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ಗ್ರಾಮದ ಹೊರವಲಯದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ ಎತ್ತಿನಬಂಡಿಯಲ್ಲಿದ್ದ ಮೂರು ಜನರಿಗೆ ಗಂಭೀರ ಗಾಯಗಳಾಗಿವೆ. ಮಾನಮ್ಮ, ಮಲ್ಲಯ್ಯ, ಅಂಬಿಕಾ ಮೂರು ಜನರಿಗೆ ಗಾಯಗಳಾಗಿವೆ. ಲಿಂಗಸಗೂರು ಮಾರ್ಗವಾಗಿ ಅಂಕುಶದೊಡ್ಡಿಯತ್ತ ಹೊರಟಿದ್ದ ಎತ್ತಿನ ಬಂಡಿ.
https://youtube.com/shorts/M4I1wLWuNwg?si=wKYhLsXf3g5t9c0Q
ಅದೇ ಮಾರ್ಗವಾಗಿ ವೇಗವಾಗಿ ಬಂದ ಟಾಟಾ ಏಸ್ ವಾಹನ ಡಿಕ್ಕಿ ಹೊಡೆದಿದೆ. ಟಾಟಾ ಏಸ್ ವಾಹನ ಡಿಕ್ಕಿ ರಭಸಕ್ಕೆ ಎತ್ತಿನ ಬಂಡಿ ಸಹ ನುಜ್ಜುಗುಜ್ಜು. ಬಂಡಿ ಎಳೆಯುತ್ತಿದ್ದ ಜೋಡಿ ಎತ್ತುಗಳಿಗೂ ಸಹ ಗಂಭೀರ ಗಾಯವಾಗಿದೆ. ಗಾಯಾಳುಗಳನ್ನ ಲಿಂಗಸಗೂರು ತಾಲೂಕು ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂದಿಸಿದಂತೆ ಮಸ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.