K2kannadanews.in
Pawan kalyan ಬೆಂಗಳೂರು : ಜನಸೇನಾ (Janasena) ಪಕ್ಷದ ಮುಖ್ಯಸ್ಥ, ಆಂದ್ರ ಡಿಸಿಎಂ (AP DCM) ಪವನ್ ಕಲ್ಯಾಣ್ ಇಂದು ಕಾರ್ಯನಿಮಿತ್ತ ವಿಧಾನಸೌಧಕ್ಕೆ (Vodhan sodha) ಆಗಮಿಸಿದ್ದರು. ಈ ವೇಳೆ ಡಿಸಿಎಂ ಆಗಮಿಸುತ್ತಿದ್ದಂತೆ ವಿಧಾನ ಸೌಧ ಸಿಬ್ಬಂದಿಗಳೇ (Staff) ಮುಗಿಬಿದ್ದು ಸೆಲ್ಫಿ (Selfy) ಕ್ಲಿಕ್ಕಿಸಿಕೊಂಡ ಘಟನೆ ನಡೆದಿದೆ.
https://youtu.be/GAN6kaHpomA?si=4-NtAzSXwoIIkJU1
ಹೌದು ತೆಲುಗು ನಟ (Telugu actor), ಆಂಧ್ರ ಪ್ರದೇಶದ ಡಿಸಿಎಂ ಪವನ್ ಕಲ್ಯಾಣ್ ಅರಣ್ಯ ಇಲಾಖೆ (Forest deportment) ಸಭೆ ಹಿನ್ನೆಲೆ, ಬೆಂಗಳೂರಿಗೆ ಆಗಮಿಸಿದ್ದರು, ಈ ವೇಳೆ ಪವನ್ ಕಲ್ಯಾಣ್ (Pawan Kalyan) ಸಭೆ ಆರಂಭಕ್ಕೂ ಮುನ್ನ ಸಿಎಂ ಸಿದ್ದರಾಮಯ್ಯ (Siddaramaiah) ಅವರನ್ನು ಭೇಟಿ ಮಾಡಲು ಆಗಮಿಸಿದ್ದರು. ಈ ವೇಳೆ ಸಚಿವ (Minister) ಜಮೀರ್ ಅಹಮದ್ ಕೂಡ ಉಪಸ್ಥಿತರಿದ್ದರು. ಬಳಿಕ ಸಭೆಯಲ್ಲಿ ಹಾಜರಾಗಲು ವಿಧಾನಸೌಧಕ್ಕೆ ಆಗಮಿಸಿದ್ದು ಸಿಬ್ಬಂದಿ ಪವನ್ ಕಲ್ಯಾಣ್ ಜೊತೆ ಸಿಬ್ಬಂದಿಗಳೆ ಫೋಟೋ ಕ್ಲಿಕ್ಕಿಸಲು ಮುಗಿಬಿದ್ದಿದ್ದರು.