K2kannadanews.in
Crime news ರಾಯಚೂರು : ಬಂಗಿಕುಂಟ ರಸ್ತೆಯಲ್ಲಿ (Road) ನೋಡ ನೋಡುತ್ತಿದ್ದಂತೆ ವ್ಯಕ್ತಿಯೊಬ್ಬನ (Murder) ಉಸಿರುಚೆಲ್ಲಿತ್ತು. ಬರೋಬ್ಬರಿ 34 ಬಾರಿ (Times) ವ್ಯಕ್ತಿಗೆ ಮನಸಿಗೆ ಬಂದಂತೆ ಇರಿದು ಹತ್ಯೆ ಮಾಡಲಾಗಿದೆ.
https://youtu.be/qzN_W2QlYNk?si=iFrdWVnr9YMli_AZ
ರಾಯಚೂರು (Raichur) ನಗರದ ಬಂಗಿಕುಂಟ ಮುಖ್ಯರಸ್ತೆಯಲ್ಲಿ ಸಾರ್ವಜನಿಕ (Public place) ಸ್ಥಳದಲ್ಲಿ, ಮಾರ್ಚ್ 15ರ (March) ಮಧ್ಯಾಹ್ನ ಸಯ್ಯದ್ ಖದೀರ್ ಎಂಬ ವ್ಯಕ್ತಿಯನ್ನ ಹಾಡಹಗಲೇ ಹತ್ಯೆ ಮಾಡಲಾಗಿತ್ತು. ಈ ಘಟನೆಯಿಂದ ಇಡೀ ರಾಯಚೂರು ನಿವಾಸಿಗಳೆ ಬೆಚ್ಚಿಬಿದ್ದಾರೆ. ಬೈಕ್ (Bike) ಮೇಲೆ ಬಂದ ಅನ್ವರ ಮತ್ತು ತಿಮ್ಮಪ್ಪಎಂಬ ಆರೋಪಿಗಳು, ಸಯ್ಯದ್ ಖದೀರ್ನ ಮೇಲೆ ಹಲ್ಲೆ ಮಾಡಿ ಬರೋಬ್ಬರಿ 34 ಬಾರಿ ಇರಿದು ಹತ್ಯೆಗೈದು, ನೇರವಾಗಿ ಸದರಬಜಾರ್ ಠಾಣೆಗೆ ತೆರಳಿ ಶರಣಾಗಿದ್ದಾರೆ.