
Vande Bharat Express ಯಾದಗಿರಿ : ಕಲಬುರ್ಗಿ ರಾಯಚೂರು ಬೆಂಗಳೂರು ಮತ್ತೆ ಓಡಾಡುತ್ತಿರುವ ಒಂದೇ ಭಾರತ ಎಕ್ಸ್ ಪ್ರೆಸ್ ರೈಲು ಯಾದಗಿರಿ ನಿಲುಗಡೆಯನ್ನ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆಯ ವಿಭಾಗೀಯ ಕಾರ್ಯಾಚರಣೆ ವ್ಯವಸ್ಥಾಪಕರು ಪತ್ರದ ಮೂಲಕ ತಿಳಿಸಿದ್ದಾರೆ ಎನ್ನಲಾಗುತ್ತಿದೆ.
https://youtu.be/KCVGeoKQrec?si=AhusVx4RvfddNbX7
ಹೌದು ದಕ್ಷಿಣ ಕೇಂದ್ರ ರೈಲ್ವೇಯು ಯಾದಗಿರಿ (YG) ನಿಲ್ದಾಣದಲ್ಲಿ ರೈಲು ಸಂಖ್ಯೆ.22232/22231 SMVB-KLBG-SMVB ವಂದೇ ಭಾರತ್ ಎಕ್ಸ್ಪ್ರೆಸ್ ಅನ್ನು ಮುಂದಿನ ಸಲಹೆಯವರೆಗೂ ನಿಲುಗಡೆ ರದ್ದುಗೊಳಿಸಬಹುದು ಎಂದು ಪತ್ರದ ಮೂಲಕ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ವಂದೇ ಭಾರತ ರೈಲು ಆರಂಭವಾದಾಗಿನಿಂದಲೂ ಕೂಡ ಯಾದಗಿರಿ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಮಾಡಬೇಕು ಎಂಬುದು ಇಲ್ಲಿನ ಜನರ ಒತ್ತಾಯವಾಗಿತ್ತು.
https://youtu.be/gKwDehBclgg?si=9PaO1DEirwk-00pn
ಇದೀಗ ರೈಲ್ವೆ ಅಧಿಕಾರಿಗಳು ಸ್ಪಷ್ಟವಾಗಿ ಪತ್ರ ಬರೆದಿದ್ದು, ಮುಂದಿನ ದಿನಗಳಲ್ಲಿ ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ, ನಿಲುಗಡೆ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳುವವರೆಗೂ, ಈ ಒಂದು ಆದೇಶ ಮುಂದುವರಿಯುತ್ತದೆ ಎಂಬ ಮಾತನ್ನು ಹೇಳಿರುವಂತದ್ದು ಯಾದಗಿರಿ ಜನರಿಗೆ ನಿರಾಸೆ ಉಂಟು ಮಾಡಿದೆ. ಆದರೆ ಈ ಒಂದು ಪತ್ರ ಅಧಿಕಾರಿಗಳು ನಿಜವಾಗಲೂ ಬರೆದಿದ್ದಾರೆಯೇ ಎಂಬ ಮಾಹಿತಿ ತಿಳಿಯಬೇಕಿದೆ.